ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ
Post

ಮಹಾನವಮಿಯ ದಿನ ಸರಸ್ವತಿ ಅಲಂಕಾರದಲ್ಲಿ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿತ್ವಾಮಹಂ ಪ್ರಾರ್ಥನೆಯೇ ನಿತ್ಯಂ ವಿದ್ಯಾದಾನಂ ಚ ಹದೇ ॥ ಕಾಶ್ಮೀರದನಿವಾಸದಲ್ಲಿನೆಲೆಸಿರುವ ಶಾರದ ದೇವಿಗೆ ನಮಸ್ಕಾರಗಳು , ದೇವಿಯೇ , ನಿನಗೆ ನಾನು ಯಾವಾಗಲೂ (ಜ್ಞಾನಕ್ಕಾಗಿ) ಪ್ರಾರ್ಥಿಸುತ್ತೇನೆ ; ದಯವಿಟ್ಟುಆ ಜ್ಞಾನದ ಉಡುಗೊರೆಯನ್ನುನನಗೆ ದಯಪಾಲಿಸಿ

ದಿನಾಂಕ 29-09-2023 ನೇ ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು. ಬೆಳಿಗ್ಗೆ 10-00 ರಿಂದ 12 -00 ರ ವರೆಗೆ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಭಜನ ಮಂಡಳಿ ಕೊಲ್ಯ ತೊಕ್ಕೊಟು, ಇವರಿಂದ ಭಜನಾ ಕಾರ್ಯಕ್ರಮ ಇದೆ . ಭಕ್ತ ಭಿಮಾನಿಗಳಿಗೆ ಆದರದ ಸ್ವಾಗತ 🙏
ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು
Post

ಯಾತ್ರಾರ್ಥಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು

ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇಪದೆ ಇಲಾಖೆಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು. ಚಾರ್‌ಧಾಮ್‌ ಯಾತ್ರೆ (₹20 ಸಾವಿರ), ಕಾಶಿ ಯಾತ್ರೆ (₹5 ಸಾವಿರ), ಮಾನಸ ಸರೋವರ ಯಾತ್ರೆ (₹30 ಸಾವಿರ), ಕರ್ನಾಟಕ ಗೌರವ್‌ ಕಾಶಿ ಯಾತ್ರೆ (₹7.5 ಸಾವಿರ). – ಇವುಗಳಿಗೆ ಸಹಾಯಧನಕ್ಕಾಗಿ ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು. chardhamyatra #kashi #kailashmansarovar #yatradham

Post

Today’s Programs

ದಿನಾಂಕ 25-08-2023 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು ಇಲ್ಲಿ ಶ್ರೀ ಬ್ರಾಹ್ಮಿ ಭಜನಾ ತಂಡ ಕಮಲಶಿಲೆ ಇವರಿಂದ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಮಧ್ಯಾಹ್ನ 1-30 ರಿಂದ3-30ರ ವರೆಗೆ ಭಜನೆ ಇದೆ.🙏🙏🙏

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕಪಾಪೋಷಿತ ಯಕ್ಷಗಾನ ಕಲಾಮಂಡಳಿ ಅವರಿಂದ ದಿನಾಂಕ 4 ಸೆಪ್ಟೆಂಬರ್ 2022ನೇ ರವಿವಾರ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಮೊಸರು ಕುಡಿಕೆ ಪ್ರಯುಕ್ತ ಕಾಲಮಿತಿ ಯಕ್ಷಗಾನ ಬಯಲಾಟ “ಗಣಪತಿ ವಿಜಯ”
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಜರಗುತ್ತಿರುವ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ( 25-07-2022 ನೇ ಸೋಮವಾರ ) ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರು ಭಜನಾ ಸೇವೆಗೈದರು
ಉಡುಪಿ ಶ್ರೀ ಕೃಷ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಇಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ನೆರವೇರಿತು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತನಾವಧಿ ಜಾತ್ರೆಯ ಅಂಗವಾಗಿ ಇಂದು ( 24-05-2022 ನೇ ಮಂಗಳವಾರ ) ಶ್ರೀ ದೇವಿ ಸನ್ನಿಧಿಯಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ಸೀತಾ ಕಲ್ಯಾಣ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಇಂದು ಸರಕಾರದ ಆಶಯದಂತೆ, ರಾಜ್ಯೋತ್ಸವಾಂಗವಾಗಿ ಕನ್ನಡ- ಸಂಸ್ಕ್ರತಿ ಸಚಿವ ಶ್ರೀ.ವಿ.ಸುನಿಲ್ ಕುಮಾರ್ ಪರಿಕಲ್ಪನೆಯ ಲಕ್ಷ ಕಂಠಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು